Friday, February 15, 2008

ಸುಬ್ರಹ್ಮಣ್ಯ ವಲಯ ವಾರ್ಷಿಕೋತ್ಸವ



ಶ್ರೀ ರಾಮಚಂದ್ರಾಪುರ ಮಠದ ವ್ಯಾಪ್ತಿಗೊಳಪಟ್ಟ ಸುಬ್ರಹ್ಮಣ್ಯ ವಲಯ ಪರಿಷತ್ತಿನ ವಾರ್ಷಿಕ ಸಮಾವೇಶ ಮತ್ತು ದುರ್ಗಾ ಪೂಜೆ ಹಾಗೂ ಕುಂಕುಮಾರ್ಚನೆ ಅಲ್ಲದೆ ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ತೀಚೆಗೆ ಯೇನೇಕಲ್ ಗ್ರಾಮದ ಮಧುವನದಲ್ಲಿ ನೆರವೇರಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ವಲಯ ಪರಿಷತ್ತಿನ ಅಧ್ಯಕ್ಷ ಪಿ.ಕೃಷ್ಣ ಶರ್ಮ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸೀಮಾ ಗ್ರಾಮಣಿ ಮೊಗ್ರ ಸತ್ಯನಾರಾಯಣ, ಸೀಮಾ ಮಹಿಳಾ ಪರಿಷತ್ತಿನ ಅಧ್ಯಕ್ಷೆ ದೇವಕಿ ಜಿ ಭಟ್ ಪನ್ನೆ ,ಸೀಮಾ ಪರಿಷತ್ತಿನ ಶಿಕ್ಷಣ ವಿಭಾಗದ ಸಂಚಾಲಕ ಕೆ ರಾಮ ಶರ್ಮ,ಕೋಟೆ ದೇವಸ್ಥಾನದ ಧರ್ಮದರ್ಶಿ ವಸಂತ ಕುಮಾರ್ ಕೋಟೆ ,ನಿಕಟ ಪೂರ್ವ ಧರ್ಮದರ್ಶಿ ಲಕ್ಷಿನಾರಾಯಾಣ ಕೋಟೆ ಪಾಲ್ಗೊಂಡರು.

ಸುಬ್ರಹ್ಮಣ್ಯ ವಲಯ ಗ್ರಾಮಣಿ ಸುರೇಶ್ ಕೋಟೆ ಸ್ವಾಗತಿಸಿ ವರಲಕ್ಷಿ ಕೋಟೆ ವರದಿ ವಾಚಿಸಿದರು.ವಲಯ ಪರಿಷತ್ತಿನ ಕಾರ್ಯದರ್ಶಿ ವೆಂಕಟೇಶ್ ಶರ್ಮ ವಂದಿಸಿದರು. ಎಂ.ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ " ಅತಿಕಾಯ ಕಾಳಗ" ಯಕ್ಷಗಾನ ತಾಳ ಮದ್ದಳೆ ನಡೆಯಿತು.

No comments: